Friday 6 January 2012

ಅದೊಂದು ದೌರ್ಬಲ್ಯನಾ ..?


                                             ಅದೊಂದು  ದೌರ್ಬಲ್ಯನಾ ..? 

 ನಯವಾದ ಕೆನ್ನೆಗೆ ಒಂದೇ ಒಂದು  ಮೊಡವೆ ಇದ್ದರೆ ಸಾಕು  ಮುಂದೆರಡು  ದಿವಸ  ಕನ್ನಡಿ ನೋಡಿಕೊಂಡೆ  ಅದು ತಿಂದು ಬಿಡುತ್ತೆ.ನಮ್ಮಲ್ಲಿ ಏನೋ ಒಂದು ಅಪರಾಧವಾದಂತೆ  ಅದನ್ನು ಹೋಗಲಾಡಿಸುವುದು   ಹೇಗೆಂದು ಅದೇ ಯೋಚನೆ. ಸ್ವಲ್ಪ ಹಲ್ಲು ಎತ್ತರ ಇದ್ದರೆ ಸಾಕು  ತುಟಿಯನ್ನು  ಬಲವಂತವಾಗಿ  ಮುಚ್ಚಲು ಪ್ರಯತ್ನ ಪಡುತ್ತೀವಿ. ಫೋಟೋ  ಕ್ಲಿಕ್ಕಿಸಿವಾಗ ಇನ್ನೊಬ್ಬರು ನೋಡುವಾಗ  ತುಟಿ ಮುಚ್ಚಿದ್ದೀನಾ ..? ಎಂದು ಅದೇ ಯೋಚನೆ. ಸ್ವಲ್ಪ ದಪ್ಪವಿದ್ದರೆ ಸಾಕು ತೆಳುವಾಗೋಕೆ  ಔಷಧದ ಪಟ್ಟಿಯ  ಬಗ್ಗೆ  Ph D  ನೆ ಆಗಿರುತ್ತದೆ. ಸ್ವಲ್ಪ ತೆಳ್ಳಗಿದ್ದರೆ ...ದಪ್ಪವಾಗಲು  ಅವನಲ್ಲಿ ಪೌಷ್ಟಿಕಾಂಶದ   ಡಬ್ಬಗಳ  ಸಂಗ್ರಹಣೆಯಿರುತ್ತದೆ. ತಲೆ ಮೇಲೆ ಸಂಪೂರ್ಣ ಕಪ್ಪಗಿನ  ಕೂದಲುಗಳಿದ್ದರೂ ಒಂದೆರಡು ಬಿಳಿ ಕೂದಲುಗಳು ಕಂಡರೆ ಸಾಕು ಮನಸ್ಸೆಲ್ಲ ಆ ಎರಡು ಕೂದಲುಗಳ ಮೇಲೆ ಹೋಗುತ್ತದೆ. ತಲೆಗೆ ಹಾಕುವ  ತೈಲದ  ಅನ್ವೇಷಣೆ ಶುರುವಾಗುತ್ತೆ. 'ಎಣ್ಣೆ ಬಿಳಿ' ಎನ್ನುವ ಕಾರಣಕ್ಕೆ ಮುಖವನ್ನ ಹಾಲು ಬಿಳಿ ಮಾಡಲು ವಿಪರೀತ  ಕ್ರೀಮನ್ನ  ಹಚ್ಚಿರುತ್ತೇವೆ.ಇವೆಲ್ಲ ನೋಡಿದರೆ  ನಾವು ಮಾಡಿದ  ತಪ್ಪು  ಆಗಿರುವದಿಲ್ಲ,ಆದರೆ ನಮ್ಮಿಂದ ಏನೋ ಪ್ರಮಾದ ಆಯ್ತಾ   ಅಥವಾ  ಹೀಗಿಲ್ಲದಿದ್ದರೆ  ಎಲ್ಲ ಸರಿ ಇರುತಿತ್ತು ಎಂದು ಅಗತ್ಯಕ್ಕಿಂತ ಜಾಸ್ತಿ ಚಿಂತಿಸುತ್ತೇವೆ.
ವಾಸ್ತವವಾಗಿ  ಜೀವನ ಪೂರ್ತಿ ಇಂತಹ -ಇಂತಹ  ದೌರ್ಬಲ್ಯದಿಂದಲೇ  ಬದುಕು  ಎಂದು ಪೂರ್ವ ನಿರ್ಧರಿತ ವಾದಂತಹುದಲ್ಲ. ದೌರ್ಬಲ್ಯಗಳೆಲ್ಲ  ನಮಗೆ ನಾವೇ ತೋಡಿ ಕೊಂಡಂತಹ ಗುಂಡಿಗಳೇ ಹೊರತು ನಾವು ಗುಂಡಿಗೆ  ಬೀಳಲಿ ಎಂದು ಇನ್ನೊಬ್ಬರು  ತೆಗೆದಿಟ್ಟದ್ದಲ್ಲ . ಮೇಲೆ ತಿಳಿಸಿದ ಯಾವುದೂ  ನಾವು ಮಾಡಿದಂತಹ  ಅಪರಾಧವಲ್ಲ. ಅವೆಲ್ಲವೂ ಸ್ವಾಭಾವಿಕ ಇಲ್ಲವೇ ಸ್ವಲ ಏರು-ಪೇರು...ಆದರೆ  ನಾವೇನೋ ಅಪರಾಧ ಮಾಡಿದೆವೇನೋ  ಎಂಬಂತಹ  ಚಿಂತೆಯಲ್ಲಿಯೇ ಮುಳುಗುತ್ತೇವೆ.


-  Response -Ability  ಯನ್ನು  ನನ್ನ ಜೀವನದಲ್ಲಿ  ಅಳವಡಿಸಿದ್ದರೆ  ಹಲವಾರು responsibility   ನನ್ನದಾಗುತಿತ್ತು     ಆದ್ದರಿಂದ  ಬಹಳ  ಜವಾಬ್ಧಾರಿಯುತ ಮನುಷ್ಯನಾಗುತ್ತಿದ್ದೆ.
- Sum  ಯೋಜನೆಗಳು  ಅಳವಡಿಸಿದ್ದರೆ  ಇನ್ನೂ ಬದುಕಿನ ಹಲವಾರು  ಸಂಯೋಜನೆಗಳು ಆಗುತಿತ್ತು.
 -  ವರುಷಕ್ಕೊಂದು  ರೆಸಲೂಶನ್  ಮಾಡೋ ಬದಲು  ಪ್ರತೀ ಕಾರ್ಯ ಶುರು ಹಚ್ಚ ಬೇಕಾದರೆ  ಕೆಲಸ ಕಾರ್ಯಗಳನ್ನ  ಬ್ರೇಕ್   ಡೌನ್  ಮಾಡಿ , ಅದಕ್ಕೂ ರೆಸಲೂಶನ್ ಮಾಡಿ ..ಗುರಿ ಮಿಗಿಸಿ .ಕೈತೊಳೆಯಬಹುದಿತ್ತು.
- ರಿಸ್ಕು  ತಕ್ಕೊಂಡು ಕೆಲವಾದರೂ ಕೆಲಸ ಮಾಡಿದಿದ್ದರೆ  ಜೀವನದಲ್ಲಿ  ಹಲವಾರು ರಸ್ಕು ತಿನ್ನುತಿದ್ದೆ.
- ಕ್ರಿಯೆಗಳ ಚೀಲಗಳಿರುತ್ತಿದ್ದರೆ...ಕ್ರಿಯಾಶೀಲನಾಗುತ್ತಿದ್ದೆನೋ..?  ಕ್ರಿಯಾಶೀಲನಾಗಿದ್ದಿದ್ದರೆ...ಕ್ರಿಯೆಗಳ  ಚೀಲವಿರುತ್ತಿದ್ದವೋ...?
-  ಮುಂಚೆ ಯೇ   ಯೋಚನೆ ಮಾಡಿದಿದ್ದರೆ   ಮಿಂಚಿನಂತೆ  ಎಲ್ಲವನ್ನೂ  ನಿಭಾಯಿಸಬಹುದಿತ್ತು.....
- Active   ಆಗಿ  ಬೆಳೀತಿದ್ದರೆ   Reactive   ತನ ವೇ  ಇರುತಿರಲಿಲ್ಲ....

ಸಸಿ ಚೆನ್ನಾಗಿ ಬೆಳೆಯಲು  ಗುಂಡಿ ತೋಡಿ ಅದರಲ್ಲಿ ನೆಟ್ಟು  ನಂತರ  ಭದ್ರವಾಗಿ  ಬೆಳೆಯುತ್ತದೆ,ನಂತರ  ನೆರಳನ್ನೂ ಕೊಡುತ್ತದೆ ...ಆದರೆ ಮನುಷ್ಯನಿಗೆ ಎರಡೇ ಆಯ್ಕೆ....ಅವನ ದೌರ್ಬಲ್ಯ  ಗುಂಡಿಯಲ್ಲಿದ್ದರೆ  ತಾನು ಮೇಲೆ  ಏರುತ್ತಾನೆ,ಇನ್ನೂ ಮೇಲೆ ಏರಿದನೋ ತನ್ನ ನೆರಳಿಗೂ ಬಾಡಿಗೆ ಕೇಳುತ್ತಾನೆ. ದೌರ್ಬಲ್ಯವೇ  ಮೇಲೆ  ಇದ್ದರೆ  ತಾನು ಗುಂಡಿಯಲ್ಲಿರುತ್ತಾನೆ.