Saturday 10 March 2012

ಕೆಪ್ಲಾಂಡಿಗರ ಸುತ್ತ...

                                                              ಕೆಪ್ಲಾಂಡಿಗರ ಸುತ್ತ...

ಆಲದ  ಮರ ನೆ  ಹಾಗೆ   ಅದರ  ಹತ್ತಿರ  ಮುಳ್ಳಾಗಲಿ, ಪೊದೆ ಗಂಟಿಗಳು ಇನ್ನಾವುದು ತೊಂದರೆ ಕೊಡುವ  ಹುಲ್ಲುಗಳಾಗಲಿ  ಹತ್ತಿರ ಇಟ್ಟುಕೊಂಡಿರುವುದಿಲ್ಲ.ಅಥವಾ  ತನ್ನ  ದೈತ್ಯ ಗಾತ್ರದಿಂದ  ಸೂರ್ಯ ರಶ್ಮಿಗಳನ್ನ ತಾನೇ ಹೀರುವುದರಿಂದ ಇನ್ನೊಂದು ಜೀವಕ್ಕೆ  ಅನ್ಯಾಯವಾಯಿತೇನೋ ..?   ನಾವಂತೂ  ಆಲದ ಮರದಷ್ಟು ದೊಡ್ಡವರಲ್ಲ,  ಇತ್ತ   ಪಾಚಿ ಹುಲ್ಲಿನಷ್ಟು  ಸಣ್ಣವರಾಗಿದ್ದರೆ   ಮುಳ್ಳಿನ ಭಯವೂ ಇರುತ್ತಿರಲಿಲ್ಲ.! ಎಲ್ಲಾ ಮುಳ್ಳನ್ನೂ  ತಪ್ಪಿಸಿ   ಬದುಕಲು  ಪಾಚಿ ಹುಲ್ಲಲ್ಲ, ಅಲ್ಲಾಡದೆ ನಿಂತಿರಲು  ಆಲದ ಮರದ ಜನ್ಮವೂ ಅಲ್ಲ. ಬೇಕಾದ ಹಾಗೆ ಧಡೂತಿ ಆಕೃತಿ ಬೆಳೆಸಿದ , ಮೈಯೆಲ್ಲಾ ಬಳ್ಳಿ ಆವರಿಸಿದ , ಅಲ್ಲಲ್ಲಿ ಗಂಟುಗಳನ್ನು ಆವರಿಸಿಕೊಂಡ , ಇನ್ನೊಂದೂ ಹುಲ್ಲು ಹುಟ್ಟದ ಹಾಗೆ ಕತ್ತಲನ್ನು ಆವರಿಸುವ ಆ ಆಲದ ಮರವನ್ನ ಎಲ್ಲರೂ ಇಷ್ಟಪಡುತ್ತಾರೆ ಅನ್ನೋದು ಅನುಮಾನ.ಇನ್ನು ಪಾಚಿಯೋ ಅದನ್ನ ಎಲ್ಲರೂ ಗಮನಿಸುವುದೂ ಕಷ್ಟದ ಸಂಗತಿ. 

ಅದೆಲ್ಲೋ  ಹೇಳುವಂತಹದಲ್ಲದ  ಸಣ್ಣ ತಪ್ಪು ನಮ್ಮಿಂದ ಆಗಿರುತ್ತದೆ  ನಮ್ಮ ಪೂರ್ವಜರ,ಇಲ್ಲವೇ ಹೆತ್ತವರ,   ಇತಿಹಾಸವನ್ನೋ, ಪರಿಸ್ಥಿತಿಯನ್ನೋ, ದೌರ್ಭಲ್ಯವನ್ನೋ,,ಚಟವನ್ನೋ  ದೊಡ್ಡ ನೆಪವಾಗಿಸಿಕೊಂಡು  ಹತ್ತಾರು ಮಂದಿಯ ಸಮ್ಮುಖದಲ್ಲೇ   ಅವಮಾನಿಸಿರುತ್ತಾರೆ. ನಿಜ್ಜ ಹೇಳಬೇಕಾದರೆ ನಾವು ಮಾಡಿದ ತಪ್ಪು ನಮ್ಮ ಅಪ್ಪ-ಅಮ್ಮ ,ಪೂರ್ವಜರು ಮಾಡಿದ ಇತಿಹಾಸಕ್ಕೆ ಅಥವಾ ದೌರ್ಭಲ್ಯಕ್ಕೆ ಹೋಲಿಕೆ ಇರುವುದಿಲ್ಲ.ಅದು ನಾವು ಮಾಡಿದ ತಪ್ಪಿಗೆ ಅಪ್ರಸ್ತುತ. ನಿಮ್ಮ ಅಪ್ಪ ಅಮ್ಮ ಹೀಗೆ ಇದ್ದರು ...ಅಂತ ಹೇಳುವವರು ನಮ್ಮ ತಪ್ಪು ಸರಿಯಾಗಲಿ ಎಂಬ ನಿಜ ಉದ್ದೇಶಕ್ಕಾಗಿರುವುದಿಲ್ಲ...ತಾನು ಸಭ್ಯಾರಾಗಿದ್ದೆವೆಂಬ ಎಂಬ ಸ್ವ ಪ್ರಶಂಸೆ ಪಡೆಯಲು! ಕೆಪ್ಲಾಂಡಿಗರಿಗೆ ಇಂತಹ ತೆವಲು. ನಿಜವಾಗಿ ನಮ್ಮ ತಪ್ಪನ್ನು ಅವರು ತಿದ್ದಬೇಕಾದರೆ ನಮ್ಮನ್ನು ಖಾಸಗಿಯಾಗಿ ಕರೆದು ಹೇಳಬೇಕಾದ ಹುಳುಕನ್ನು ಹೇಳಬಹುದಾದ ಕ್ರಮದಲ್ಲಿ ಹೇಳಬಹುದು . ಕೆಪ್ಲಾಂಡಿಗರಿಗೆ ಅದು ಬೇಕಾಗಿಲ್ಲ. ನಮ್ಮ ಅವಮಾನ ಮತ್ತು ಅವರ   ಸ್ವ ಪ್ರಶಂಸೆ ಅವರಿಗೆ ಬೇಕು. ತಕ್ಷಣ ಪ್ರತಿಕ್ರಿಯಿಸಬೇಕು (React) ಅಂತನಿಸದೆ ಇರದು ನಮಗೆ. ಒಂದುವೇಳೆ ನಾವು ಪ್ರತಿಕ್ರಿಯಿಸಿದ್ದೇ ಆದರೆ ಅದು ಕೆಪ್ಲಾಂಡಿಗರಿಗೆ ಸಂದ ಜಯ.
ಜವಾಬ್ಧಾರಿಯುತ ಮನೆಯ ಸೊಸೆ ನೀವಾಗಿದ್ದರೆ ತವರು ಮನೆಯ ಕುಟುಂಬದ ಯಾರೋ ಒಬ್ಬರು ಮಾಡಿದ ಎಡವಟ್ಟು ನೀವೇ ಮಾಡಿದ್ದೀರಿ ಎಂದು ಬಿಂಬಿಸಲು ಶುರು ಮಾಡುತ್ತಾರೆ. ಇಲ್ಲಿ ನಮ್ಮಲ್ಲಿರುವ ಸಂಯಮ ನಮ್ಮನ್ನು ಕಾಪಾಡುತ್ತದೆಯೇ ವಿನಃ ಪ್ರತಿಕ್ರಿಯಿಸುವುದರಿಂದಲ್ಲ.
ನಮ್ಮ ಜೀವನದಲ್ಲಿ ಇಂತಹ ಚಿಕ್ಕ ಚಿಕ್ಕ ವಿಷಯಗಳು ಮುಳ್ಳುಗಳು ಚುಚ್ಚುತಿರುತ್ತದೆ, ಆಗಾಗ್ಗೆ ನೋವನ್ನ ಕಾಡುತಿರುತ್ತದೆ. ಕಾಲ ಕ್ರಮೇಣ ರೋಧಕ ಶಕ್ತಿ ಹೆಚ್ಚುತಿರುತ್ತದೆ.ಎಲ್ಲ ವಿಚಾರವನ್ನು ನಾವು ಹೇಗೆ ಸ್ವೀಕರಿಸುತ್ತೀವಿ ಅನ್ನೋದರಲ್ಲೇ ನಮ್ಮ ಜೀವನದ ಪಾತ್ರವನ್ನು ವಹಿಸುತ್ತದೆ. ಅಯೋಡಿನ್ ಭರಿತ ಉಪ್ಪು ನಮ್ಮ ದೇಹದ ರಾಸಾಯಿನಿಕ ವನ್ನ ಹೇಗೆ ಸಮತೋಲನವನ್ನ ಕಾಪಾಡುತ್ತೋ ಒಂದರ್ಥದಲ್ಲಿ ಕೆಪ್ಲಾಂಡಿಗರು ಸಹ ನಮ್ಮ ಜೀವನವನ್ನ ಸಮತೋಲನವನ್ನ ಕಾಪಾಡಿರುತ್ತಾರೆ. ನಮ್ಮ ಜೀವನದ ಶೈಲಿಯ ಅಸಮತೋಲನವನ್ನ ತಪ್ಪಿಸಿರುತ್ತಾರೆ.
ಕೆಪ್ಲಾಂಡಿಗರು ಕಡಿಮೆ ಇರುವ ನಮ್ಮ ಓರಗೆಯವರನ್ನ ಗಮನಿಸಿ: ಪೋಲಿಸ್ ನ ಮಗ ಪೋಲಿಯಾಗಿರುವುದು, ಮಾಸ್ತರರ ಮಗ ಫೈಲಾಗಿರುವುದು, ಶ್ರೀಮಂತರ ಮಗ ಸಾಲಗಾರನಾಗಿರುವುದು, ದೊಡ್ಡವರ ಮಕ್ಳು ಸಣ್ಣತನ ಮಾಡಿರುವುದು.ಸಭ್ಯರ ಮಕ್ಕಳು ಪೋರ್ಕಿಯೊಂದಿಗೆ....ಹೀಗೆ ಹಲವಾರು ಉದಾಹರಣೆ ಯನ್ನ ಕಾಣುತ್ತೇವೆ. ಅದೇ ಕೆಪ್ಲಾಂಡಿಗರ ಜೊತೆ ಬೆಳೆದವರನ್ನ ಗಮನಿಸಿದಾಗ ಕುಡುಕನ ಮಗ ಕುಡಿತದಿಂದ ದೂರ, ಜೂಜುಗಾರನ ಮಗನಿಗೆ ಬಾಜಿ ಕಟ್ಟುವುದೇ ಗೊತ್ತಿರುವುದಿಲ್ಲ, ಸಣ್ಣ ವರ ಮಕ್ಕಳು ಸಣ್ಣ ತನ ,ಚಿಲ್ಲರೆ ಕೆಲಸದಿಂದ ದೂರವಿರುತ್ತಾರೆ, ಲಂಪಟ ತನ ವಿರುವವನ ಮಗ ಲಂಪಟ ತನದಿಂದ ದೂರವಿರುತ್ತಾನೆ, ಸಾಲಗಾರನ ಮಕ್ಕಳು ಸಾಲದಿಂದ ದೂರವಿರುತ್ತಾರೆ.
ಪುಣ್ಯವಶಾತ್ ನಾವು ನೀವೆಲ್ಲಾ ಕೆಪ್ಲಾಂಡಿಗರ ಸುತ್ತ ಬದುಕುತಿದ್ದೀವಿ ...ಏನಂತೀರಿ...?
   

Sunday 19 February 2012

ಚೆಲ್ವಿಗೊಂದು ಮಾತು ...

                                            ಚೆಲ್ವಿಗೊಂದು    ಮಾತು ...

 ಅವನು ನೋಡಿಯೂ  ವಿನಯದಿಂದ ನಗಲಿಲ್ವಾ..?  ನಿನ್ನನ್ನ   ನೋಡಿಯೂ  ಮಾತನಾಡಿಸಲಿಲ್ವ..?  ಹುಟ್ಟು ಹಬ್ಬದ ಶುಭಾಷಯ ಕಳಿಸಿಲ್ವಾ..?  ನೀ ಮೆಚ್ಚಿದ   ಹುಡುಗ ಇನ್ನೊಬ್ಬಳೊಂದಿಗೆ  ಫ್ಳರ್ಟು ಮಾಡ್ತಾ ಇರ್ತಾನ.?  ನೀ ಕರೆದಾಗ  ಭೇಟಿಯಾಗಲು ಪಾರ್ಕಿಗೆ ಬರಲಿಲ್ವ..?  ಸಿನೆಮಾಕ್ಕಂತೂ ಕರಕ್ಕೊಂಡು  ಹೋಗಿಲ್ವಾ..?   miss call  ಕೊಟ್ಟಾಗ  ಅವನು ತಿರುಗ  call ಮಾಡಲ್ವಾ..? ಹೋಗಲಿ   call ಮಾಡಿದಾಗ   ಪ್ರತೀ call ನ್ನೂ attend    ಮಾಡಿಲ್ವಾ.?  Mail   ಗೆ  respond   ಮಾಡಲ್ವ..?    ನೀ  ಚೆಂದವಾಗಿ   ಕಾಣುವಂತೆ  ಅಲಂಕರಿಸಿ ಉಡುಗೆ ತೊಟ್ಟಾಗ  ಒಳ್ಳೆಯ ಮಾತನ್ನೂ  ಹೇಳದೇ ಹೊರಟು  ಹೋದನಾ .?  ಒಂದುಸಲನೂ   ಚಾಕಲೇಟ್  ಐಸುಕ್ರೀಮು ಕೊಟ್ಟಿಲ್ವಾ...?   ಈವರೆಗೆ  ಜೀನ್ಸು ಪೇಂಟು ಗಿಫ್ಟಾಗಿ ಕೊಂಡುಕೊಳಲಿಲ್ವಾ..?   

ಗೆಳತಿ...,
ಅಷ್ಟೊಂದು ಜನ  ಸ್ಪರ್ಧೆಗಿರುವಾಗ   .."ನಿನಗೆ ಸಿಗಲ್ಲ ಬಿಡು"  ಅನ್ನೋ ಹುಡುಗನಿಗಿಂತ  "ಅಷ್ಟೂ ಜನರಲ್ಲಿ  ನೀ ಒಬ್ಬಳು ಯಾಕಾಗಬಾರದು  ಪ್ರಯತ್ನಿಸಿ ನೋಡು"   ಅನ್ನುವವನ ಮಾತು ಹತ್ತಿರವಾಗಬೇಕು.

ಹಿರಿಯರ ಮುಂದೆ ಕಾಲಮೇಲೆ ಕಾಲು ಬೇಡ !..ಕಾಲು ಅಲ್ಲಾಡಿಸಬೇಡ!   ಅನ್ನೋದು ಅವನಿಂದ  ಕಿರಿ ಕಿರಿ ಮಾತು  ಆದರೂ ...ಅದು ನಮ್ಮನ್ನ  ಡಿಸೆನ್ಸಿಯನ್ನಾಗಿಸುತ್ತದೆ. ಅವನ ಮಾತು ತುಂಬಾ ಸಲ  ಪ್ರಯೋಜನಕಾರಿಯನ್ನಾಗಿಸುತ್ತದೆ.     



 ತುಂಬಾ ಸಲುಗೆಯಿಂದಿರಬೇಡ ..ಎನ್ನುವ    ಮಾತು ಹರಟೆಯಾದರೂ  ನಮ್ಮನ್ನ  ದಾರಿ ತಪ್ಪದಂತೆ ಮಾಡಿದಕ್ಕೆ  ಗೌರವ ಕೊಡಲೇಬೇಕು.

ಆ ..ದಿನಗಳಲ್ಲಿ   ಕೇವಲ   ಸಾಂತ್ವಾನ  ಮಾತ್ರ   ನೆಮ್ಮದಿ ತರಬಲ್ಲದು, ಕೇಳೆ... ಗೆಳತಿ ಆ  ಒಂದು ನೆಮ್ಮದಿಯ ಸಾಂತ್ವಾನ   ಸಾವಿರ  ಐಸುಕ್ರೀಮು  ಕೊಟ್ಟರೂ ಸಿಗದು.

ಚೆಲ್ಲು ಚೆಲ್ಲು ವಾಗಿ ಮಾತನಾಡಿ ಸುಮ್ಮ್  ಸುಮ್ನೆ ಖಾಸಗಿ  ವಿಷಯವನ್ನ ಬಯಲು ಮಾಡೋದಕ್ಕಿಂತ,  ಅಥವಾ  ನಿಜ ವಿಷಯವನ್ನ ತಿರುಚಿ  ತರ್ಲೆ ,ರಗಳೆಗಳನ್ನ  ನಮ್ಮ ಮೇಲೆ ಬರುವ ಹಾಗೆ ಮಾಡೋದಕ್ಕಿಂತ  ತಟಸ್ಥವೆ  ಲೇಸು....

ಅಂದಕ್ಕೆ ಅಭಿಮಾನಿಯಾಗು  ಒಳ್ಳೆದೇ  ಹಾನಿಯೇನಿಲ್ಲ....ಆದರೆ ಅವನ  ಅಂಧ:ಕ್ಕೆ  ಅಲ್ಲ.

ನನಗೊತ್ತು ನೀನು ಸ್ಟೈಲು ಗಾರ್ತಿ! ಚೂಡಿ  ಉಟ್ಟಾಗ  ಒಂದು ಸ್ಟೈಲು,  ಸೀರೆ ಉಟ್ಟಾಗ ಇನ್ನೊಂದು ತರಹದ ಸ್ಟೈಲು,.. ಜೀನ್ಸು ಹಾಕಿದಾಗ  ಕಣ್ಣು ಕ್ಲಿಕ್ಕಿಸುವ ಸ್ಟೈಲು! ಲಿಫ್ಟಿಕ್  ಹಾಕಿದಾಗ ಕಣ್ಣು ಕುಕ್ಕಿಸುವ  ಶೋಕಿ ...ಇದು ನಿನ್ನ  ಸ್ವಂತ ಆಸ್ತಿ.

ಬಹುತೇಕವಾಗಿ  ನಾವು  ಅದೇನೋ  ನಮ್ಮ ಮೆಚ್ಚಿನ, ನಮಿಗೆ ಹತ್ತಿರವಾದವರು  ನಮ್ಮ ದಿನ ನಿತ್ಯದ ಚಲನ ವಲನಕ್ಕೆ  ಬೇಲಿ ಹಾಕ್ತಿದ್ದಾರೆ  ಆನಿಸಿಬಿಡುತ್ತದೆ. ಆದರೆ  ಹೆಚ್ಚಿನ ಸಲ ನಮಗೆ ಗೊತ್ತಿಲ್ಲದಂತೆ ಸುಳ್ಳಾಗುತ್ತದೆ ಅವೆಲ್ಲಾ  ಬೇಲಿ ಅಲ್ಲ .. ಅವು   ಒಂದು  guide map ಆಗಿರುತ್ತದೆ ಅಷ್ಟೇ!  ಅದನ್ನು  ಉಪಯೋಗಿಸಿದ್ದೆ   ಆದಲ್ಲಿ  ನಾವು ಹೋಗಬೇಕಾದ ದಾರಿ ತಪ್ಪುವುದಿಲ್ಲ,ಮೋಸಹೋಗುವುದು  ಕಡಿಮೆಯಾಗುತ್ತದೆ! 

ಇನ್ನೂ  ಸಾಕಷ್ಟು  ಮಾತಾಡಬೇಕಿತ್ತು....  Coffee-DAY ಗೆ ಬರ್ತಿಯಾ...?

  



    

Friday 6 January 2012

ಅದೊಂದು ದೌರ್ಬಲ್ಯನಾ ..?


                                             ಅದೊಂದು  ದೌರ್ಬಲ್ಯನಾ ..? 

 ನಯವಾದ ಕೆನ್ನೆಗೆ ಒಂದೇ ಒಂದು  ಮೊಡವೆ ಇದ್ದರೆ ಸಾಕು  ಮುಂದೆರಡು  ದಿವಸ  ಕನ್ನಡಿ ನೋಡಿಕೊಂಡೆ  ಅದು ತಿಂದು ಬಿಡುತ್ತೆ.ನಮ್ಮಲ್ಲಿ ಏನೋ ಒಂದು ಅಪರಾಧವಾದಂತೆ  ಅದನ್ನು ಹೋಗಲಾಡಿಸುವುದು   ಹೇಗೆಂದು ಅದೇ ಯೋಚನೆ. ಸ್ವಲ್ಪ ಹಲ್ಲು ಎತ್ತರ ಇದ್ದರೆ ಸಾಕು  ತುಟಿಯನ್ನು  ಬಲವಂತವಾಗಿ  ಮುಚ್ಚಲು ಪ್ರಯತ್ನ ಪಡುತ್ತೀವಿ. ಫೋಟೋ  ಕ್ಲಿಕ್ಕಿಸಿವಾಗ ಇನ್ನೊಬ್ಬರು ನೋಡುವಾಗ  ತುಟಿ ಮುಚ್ಚಿದ್ದೀನಾ ..? ಎಂದು ಅದೇ ಯೋಚನೆ. ಸ್ವಲ್ಪ ದಪ್ಪವಿದ್ದರೆ ಸಾಕು ತೆಳುವಾಗೋಕೆ  ಔಷಧದ ಪಟ್ಟಿಯ  ಬಗ್ಗೆ  Ph D  ನೆ ಆಗಿರುತ್ತದೆ. ಸ್ವಲ್ಪ ತೆಳ್ಳಗಿದ್ದರೆ ...ದಪ್ಪವಾಗಲು  ಅವನಲ್ಲಿ ಪೌಷ್ಟಿಕಾಂಶದ   ಡಬ್ಬಗಳ  ಸಂಗ್ರಹಣೆಯಿರುತ್ತದೆ. ತಲೆ ಮೇಲೆ ಸಂಪೂರ್ಣ ಕಪ್ಪಗಿನ  ಕೂದಲುಗಳಿದ್ದರೂ ಒಂದೆರಡು ಬಿಳಿ ಕೂದಲುಗಳು ಕಂಡರೆ ಸಾಕು ಮನಸ್ಸೆಲ್ಲ ಆ ಎರಡು ಕೂದಲುಗಳ ಮೇಲೆ ಹೋಗುತ್ತದೆ. ತಲೆಗೆ ಹಾಕುವ  ತೈಲದ  ಅನ್ವೇಷಣೆ ಶುರುವಾಗುತ್ತೆ. 'ಎಣ್ಣೆ ಬಿಳಿ' ಎನ್ನುವ ಕಾರಣಕ್ಕೆ ಮುಖವನ್ನ ಹಾಲು ಬಿಳಿ ಮಾಡಲು ವಿಪರೀತ  ಕ್ರೀಮನ್ನ  ಹಚ್ಚಿರುತ್ತೇವೆ.ಇವೆಲ್ಲ ನೋಡಿದರೆ  ನಾವು ಮಾಡಿದ  ತಪ್ಪು  ಆಗಿರುವದಿಲ್ಲ,ಆದರೆ ನಮ್ಮಿಂದ ಏನೋ ಪ್ರಮಾದ ಆಯ್ತಾ   ಅಥವಾ  ಹೀಗಿಲ್ಲದಿದ್ದರೆ  ಎಲ್ಲ ಸರಿ ಇರುತಿತ್ತು ಎಂದು ಅಗತ್ಯಕ್ಕಿಂತ ಜಾಸ್ತಿ ಚಿಂತಿಸುತ್ತೇವೆ.
ವಾಸ್ತವವಾಗಿ  ಜೀವನ ಪೂರ್ತಿ ಇಂತಹ -ಇಂತಹ  ದೌರ್ಬಲ್ಯದಿಂದಲೇ  ಬದುಕು  ಎಂದು ಪೂರ್ವ ನಿರ್ಧರಿತ ವಾದಂತಹುದಲ್ಲ. ದೌರ್ಬಲ್ಯಗಳೆಲ್ಲ  ನಮಗೆ ನಾವೇ ತೋಡಿ ಕೊಂಡಂತಹ ಗುಂಡಿಗಳೇ ಹೊರತು ನಾವು ಗುಂಡಿಗೆ  ಬೀಳಲಿ ಎಂದು ಇನ್ನೊಬ್ಬರು  ತೆಗೆದಿಟ್ಟದ್ದಲ್ಲ . ಮೇಲೆ ತಿಳಿಸಿದ ಯಾವುದೂ  ನಾವು ಮಾಡಿದಂತಹ  ಅಪರಾಧವಲ್ಲ. ಅವೆಲ್ಲವೂ ಸ್ವಾಭಾವಿಕ ಇಲ್ಲವೇ ಸ್ವಲ ಏರು-ಪೇರು...ಆದರೆ  ನಾವೇನೋ ಅಪರಾಧ ಮಾಡಿದೆವೇನೋ  ಎಂಬಂತಹ  ಚಿಂತೆಯಲ್ಲಿಯೇ ಮುಳುಗುತ್ತೇವೆ.


-  Response -Ability  ಯನ್ನು  ನನ್ನ ಜೀವನದಲ್ಲಿ  ಅಳವಡಿಸಿದ್ದರೆ  ಹಲವಾರು responsibility   ನನ್ನದಾಗುತಿತ್ತು     ಆದ್ದರಿಂದ  ಬಹಳ  ಜವಾಬ್ಧಾರಿಯುತ ಮನುಷ್ಯನಾಗುತ್ತಿದ್ದೆ.
- Sum  ಯೋಜನೆಗಳು  ಅಳವಡಿಸಿದ್ದರೆ  ಇನ್ನೂ ಬದುಕಿನ ಹಲವಾರು  ಸಂಯೋಜನೆಗಳು ಆಗುತಿತ್ತು.
 -  ವರುಷಕ್ಕೊಂದು  ರೆಸಲೂಶನ್  ಮಾಡೋ ಬದಲು  ಪ್ರತೀ ಕಾರ್ಯ ಶುರು ಹಚ್ಚ ಬೇಕಾದರೆ  ಕೆಲಸ ಕಾರ್ಯಗಳನ್ನ  ಬ್ರೇಕ್   ಡೌನ್  ಮಾಡಿ , ಅದಕ್ಕೂ ರೆಸಲೂಶನ್ ಮಾಡಿ ..ಗುರಿ ಮಿಗಿಸಿ .ಕೈತೊಳೆಯಬಹುದಿತ್ತು.
- ರಿಸ್ಕು  ತಕ್ಕೊಂಡು ಕೆಲವಾದರೂ ಕೆಲಸ ಮಾಡಿದಿದ್ದರೆ  ಜೀವನದಲ್ಲಿ  ಹಲವಾರು ರಸ್ಕು ತಿನ್ನುತಿದ್ದೆ.
- ಕ್ರಿಯೆಗಳ ಚೀಲಗಳಿರುತ್ತಿದ್ದರೆ...ಕ್ರಿಯಾಶೀಲನಾಗುತ್ತಿದ್ದೆನೋ..?  ಕ್ರಿಯಾಶೀಲನಾಗಿದ್ದಿದ್ದರೆ...ಕ್ರಿಯೆಗಳ  ಚೀಲವಿರುತ್ತಿದ್ದವೋ...?
-  ಮುಂಚೆ ಯೇ   ಯೋಚನೆ ಮಾಡಿದಿದ್ದರೆ   ಮಿಂಚಿನಂತೆ  ಎಲ್ಲವನ್ನೂ  ನಿಭಾಯಿಸಬಹುದಿತ್ತು.....
- Active   ಆಗಿ  ಬೆಳೀತಿದ್ದರೆ   Reactive   ತನ ವೇ  ಇರುತಿರಲಿಲ್ಲ....

ಸಸಿ ಚೆನ್ನಾಗಿ ಬೆಳೆಯಲು  ಗುಂಡಿ ತೋಡಿ ಅದರಲ್ಲಿ ನೆಟ್ಟು  ನಂತರ  ಭದ್ರವಾಗಿ  ಬೆಳೆಯುತ್ತದೆ,ನಂತರ  ನೆರಳನ್ನೂ ಕೊಡುತ್ತದೆ ...ಆದರೆ ಮನುಷ್ಯನಿಗೆ ಎರಡೇ ಆಯ್ಕೆ....ಅವನ ದೌರ್ಬಲ್ಯ  ಗುಂಡಿಯಲ್ಲಿದ್ದರೆ  ತಾನು ಮೇಲೆ  ಏರುತ್ತಾನೆ,ಇನ್ನೂ ಮೇಲೆ ಏರಿದನೋ ತನ್ನ ನೆರಳಿಗೂ ಬಾಡಿಗೆ ಕೇಳುತ್ತಾನೆ. ದೌರ್ಬಲ್ಯವೇ  ಮೇಲೆ  ಇದ್ದರೆ  ತಾನು ಗುಂಡಿಯಲ್ಲಿರುತ್ತಾನೆ.