Saturday 26 November 2011

ಬದಲಾವಣೆ ಮತ್ತು ..ವಿಕಾಸ...

                                                   ಬದಲಾವಣೆ ----->ವಿಕಾಸ...

ಹುಳ ನೋಡು ನೋಡುತಿದ್ದಂತೆ  ಪತಂಗವಾಗಿ ಹಾರಿಬಿಡ್ತು,  ಮೊದ ಮೊದಲು ಬೊಂಬೆಯೊಂದಿಗೆ  ಆಟಿಕೆಯೊಂದಿಗೆ  ಆಟವಾಡುತಿದ್ದ ಹುಡುಗಿ ಮೊಡವೆ ಬಂದೊಡನೆ ತಕ್ಷಣ ಯಾಕೋ  ಒಳಗೇ ನಾಚಿಕೆಗೆ ನಾಂದಿ ಹಾಡುತ್ತಾಳೆ. ಒಂದು ಮಗುವಾದ ಮೇಲೆ ತಕ್ಷಣ  ನಾಚಿಕೆಗೂ ಇವಳಿಗೂ ಯಾವುದೇ ಸಂಭಂಧವೇ ಇಲ್ಲದಂತೆ ತನ್ನದೇ ಜವಾಬ್ಧಾರಿಯೆಡೆಗೆ ಮುಖ ಮಾಡಿರುತ್ತಾಳೆ. ಕಲಿತ ಶಾಲೆಗೆ  ನಾಲ್ಕು ವರ್ಷ ನಂತರ ಒಮ್ಮೆಯಾದರೂ ಹೋಗಿ ನೋಡಿ  ನಮ್ಮ ಎದೆವರೆಗೆ ಬರುತಿದ್ದ ಡೆಸ್ಕು ಬೆಂಚು  ನಮ್ಮ ಮೊಣಕಾಲಿಗೆ   ಬಂದಿರುತ್ತೆ. ನಮಗೆ ಪಾಠ ಹೇಳಿಕೊಟ್ಟ  ಮೇಷ್ಟ್ರ ಕಪ್ಪಗಿನ ಕೂದಲು ಬಿಳಿಯಾಗಿ  ಅನುಭವವನ್ನ ತೋರಿಸುತ್ತಾ ಇರುತ್ತದೆ. ತೆಳು ದನಿಯಲ್ಲಿ ಮಾತನಾದುತಿದ್ದವನು  ಅದೇನೋ ಎರಡುವರ್ಷ ಕಳೆದ ಮೇಲೆ ಮಾತನಾಡುವಾಗ ಗಡಸು ಸ್ವರದಲ್ಲಿ ಮಾತನಾಡುತ್ತಾನೆ..ನಯವಾಗಿದ್ದ ಗಡ್ಡ  ಶೇವು  ಮಾಡುತ್ತಿರುವ ಗಡ್ಡ ವಾಗಿರುತ್ತದೆ.

ಚಿಕ್ಕಮಗಳು ಅಪ್ಪನಲ್ಲಿ ಒಪ್ಪಿ ಕೇಳಿತಂತೆ..ಸ್ವಲ್ಪ ಸಮಯವಾದನಂತರ ಗಂಡನಲ್ಲಿ...ಇನ್ನು ಸ್ವಲ್ಪ ಸಮಯವಾದನಂತರ   ಮಗುವಿನಲ್ಲಿ....ಇನ್ನು ಮುಂದೆ ಹೋದನಂತರ ಪುಳ್ಳಿಯಲ್ಲಿ..(ಮಗುವಾದ ನಂತರ ಅಪ್ಪನಲ್ಲಿ,...ಪುಳ್ಲಿಯಾದನಂತರ  ಮಗನಲ್ಲಿ....ಉಹುಂ !  ಬೇಡ...ಅದಕ್ಕೆ!)

ಇದೆಲ್ಲಾ  ಬದಲಾವಣೆ ಇಲ್ಲೊಂದು   ವಿಕಾಸ.

ಬದಲಾವಣೆ -ವಿಕಾಸ  ಎರಡು  ನಾಣ್ಯಗಳ   ಮುಖದಂತೆ , (sides  of  the Two  coins  , not just   like    Two sides of  A  coin . ) ಬದಲಾವಣೆಗೊಂದು   ಮೌಲ್ಯವಾದರೆ ..ವಿಕಾಸಕ್ಕೆ ಇನ್ನೊಂದು ಮೌಲ್ಯ. ಎಲ್ಲಾ ವಿಕಾಸವೂ ಒಂದು ಬದಲಾವಣೆ ಕಂಡಿದೆ... ಆದರೆ ಎಲ್ಲ ಬದಲಾವಣೆ ವಿಕಾಸವನ್ನು ಹೊಂದಬೇಕೆನಿಲ್ಲ. ವಿಕಾಸವಾಗಬೇಕೆಂದು ಜೀವನದಲ್ಲಿ ಅದೆಷ್ಟೊಂದು ಬದಲಾವಣೆಗಳನ್ನು ಮಾಡುತ್ತೀವಿ, ಅವುಗಳೆಲ್ಲ ಬದಲಾವಣೆಯೇ  ಆಗಿ ಇರುತ್ತವೆಯೇ ಹೊರತು ವಿಕಾಸವಾಗಿರುವುದಿಲ್ಲ. ಬದಲಾವಣೆಯ  frequency  ಜಾಸ್ತಿಯಾದರೆ ಕೊನೆಗೆ ಚಂಚಲವಾಗಿ ಬಿಡುತ್ತವೆ.
ವಿಕಾಸ - ಬದಲಾವಣೆ ಯಿಲ್ಲದ ನಮ್ಮ ಬದುಕು  ನಿಂತಲ್ಲೇ ನಿಂತಿರುತ್ತದೆ. ಗ್ಯಾರೇಜಿನಲ್ಲಿರುವ  ಯಾವುದೋ  ಜಮಾನದ ಟಯರಿನಂತೆ...  ಇತ್ತ ಹೆಚ್ಚ ಸವೆಯುತಿರುವುದಿಲ್ಲ, ಬಲ ಹಾಕದೆ ಮುಂದೆ ಉರುಳೋದೂ ಇಲ್ಲ . ಜಡತ್ವದಿಂದ  ಹೊರಬಂದಿರುವುದಿಲ್ಲ, ಹೊರಬರುವುದೂ ಇರುವುದಿಲ್ಲ. ಬೇರೊಂದು ಸಿದ್ಧಾಂತವನ್ನೇ ಒಪ್ಪಬೇಕೆಂದು ಹೇಳುತ್ತಿಲ್ಲ.ಯಾವುದೋ ಒಂದು ಸಿದ್ಧಾಂತಕ್ಕೆ  ಅಂಟಿಕೊಂಡು - ಜಂಟಿಕೊಂಡು ಇರುವುದರಿಂದ, ನಮ್ಮ ಅಭಿಪ್ರಾಯ/ಸಿದ್ಧಾಂತದ  ನವೀಕರಣಕ್ಕೂ ಯೋಚನೆಯೇ ಮಾಡಿರುವುದಿಲ್ಲ. ನವೀಕರಣ ಮಾಡದ ಹೊರತು ಬದಲಾವಣೆಗೆ  ಅವಕಾಶವಿದೆಯಷ್ಟೇ ಹೊರತು ವಿಕಾಸಕ್ಕಿಲ್ಲ.
 ಹಲವು ಸಲ  ನಮ್ಮ ಒಳ್ಳೆಯ  ಆಸೆ , ಬಯಕೆಗಳು  ನಮ್ಮನ್ನ ವಿಕಸಿಸುತ್ತದೆ. ಬಯಕೆಗಳನ್ನು ಕಾರ್ಯರೂಪಗೊಳಿಸುವಾಗ ಹಲವಾರು ಪಾಠಗಳನ್ನ,ಜೀವನಾಂಶಗಳನ್ನ, ಮೌಲ್ಯಗಳನ್ನ,ಬದಲಾವಣೆಗಳನ್ನ ನಮ್ಮದಾಗಿಸುತ್ತೀವಿ. ಬಯಕೆಗಳನ್ನ ಕಾರ್ಯರೂಪಗೊಳಿಸಲು ಪ್ರಯತ್ನಿಸದೇ ಇದ್ದಾಗ ಅವುಗಳು 'ಬಯಕೆಗಳೇ' ಆಗಿ  ಇರುತ್ತವೆ. ತಿಳಿಯಬೇಕಾದ ಪಾಠ,ಸೇವಿಸಬೇಕಾದ  ಜೀವನಾಂಶ,ಪಡೆಯಬೇಕಾದ ಮೌಲ್ಯಗಳನ್ನ, ಆಗಬೇಕಾದ ಬದಲಾವಣೆಗಳನ್ನ ಎಲ್ಲೋ ಕಳಕೊಳ್ಳುತ್ತೀವಲ್ವಾ..? 

ನಾನಂತೂ   ನನ್ನ  ಜಡತ್ವದಿಂದ ಹೊರಬಂದಿಲ್ಲ.....ಯಾವಾಗ ಹೊರ  ಬರುತ್ತೀನೋ..?




Thursday 10 November 2011

ಸಮಗಾರ ಹೇಳಿದ ಕಥೆ....

                                                        KP  Nettar ' s
                                               ಸಮಗಾರ ಹೇಳಿದ ಕಥೆ.... 

ಚರ್ಮದ  ಬೆಲ್ಟು, ಚಪ್ಲಿ  ಬಗ್ಗೆ ಅವನಿಗೆ  ಎಲ್ಲಿಲ್ಲದ ಪ್ರೀತಿ, ದಿನಾ ನೋಡುವುದು ,ಮಾತನಾಡುವುದು ,ಕೆಲಸಮಾಡುವುದು ಚಪ್ಲಿ ಬಗ್ಗೆ.ಪ್ರೀತಿಯಿಂದ ಹೊಲಿಗೆ ಹಾಕುವುದು , ಪಾಲಿಶ್  ಮಾಡುವುದು, ಚಪ್ಲಿಯನ್ನ  ಓರಣ ವಾಗಿರಿಸುವುದು. ಅವನು ಈ ಕೆಲಸವನ್ನ ಪ್ರೀತಿಸಿದ  ಕಾರಣ  ಬದುಕೂ ಅವನನ್ನ ಪ್ರೀತಿಸಿತ್ತು. ಅವನೊಬ್ಬ ಚಾಣಾಕಿ ಸಮಗಾರನಾಗಿದ್ದ. ಈ ಕಾರಣಕ್ಕೆ  ಊರಿನ  ಜನರೆಲ್ಲಾ ಚಪ್ಲಿಗಾಗಲಿ, ಬೆಲ್ಟು ಗೆ ಆಗಲಿ ಅವನಲ್ಲೇ ಹೋಗುತ್ತಿದ್ದರು....

ಒಂದು ದಿವಸ  ನಾಲ್ಕು ಜನ ಗೆಳತಿಯರು  ಕಾರಿನಲ್ಲಿ   ಯಾವುದೋ ಸಮಾರಂಭಕ್ಕೆ  ಹೊರಟರು. ದಾರಿ ಮಧ್ಯದಲ್ಲಿ  ಒಬ್ಬಳು  'ಬುಕೈ'  ಕೊಂಡುಕೊಳ್ಳಬೇಕೆಂದು  ನೆನಪಿಸಿದಳು. ಅಂಗಡಿಗೆ ಹೋಗಿ ಗೊಂಚಲಿನಲ್ಲಿ 4  ಚೆಂದದ ಹೂವುಗಳಿರುವುದನ್ನೇ ಆಯ್ಕೆ ಮಾಡಿದರು. ಹೀಗೆ ಮತ್ತೆ ಕಾರಿನೊಳಕ್ಕೆ  ಬರುವಷ್ಟರಲ್ಲಿ ಒಬ್ಬಳ ಚಪ್ಪಲಿಯ ಉಂಗುಷ್ಟ ತುಂಡಾಯಿತು. ನಾಲ್ಕೂ ಜನರು  ಸಮಗಾರನ  ಹತ್ತಿರ ಬಂದರು.  ಸಮಗಾರನು ಉಂಗುಷ್ಟಕ್ಕೆ ಹೊಲಿಗೆ ಹಾಕಲು ಶುರು ಮಾಡಿದನು. ನಿಮ್ಮ ಕಾರಿನ ಕ್ಲಚ್ ಗಟ್ಟಿಯಾಗಿರುವುದರಿಂದ ಸಡಿಲಿಸಿದರೆ ಒಳ್ಳೆದು ಎಂದನು. ಕಾರಿನ  ಕ್ಲಚ್  ಗಟ್ಟಿಯಾಗಿರುವುದು  ನಿನಿಗೆ ಹೇಗೆ ಗೊತ್ತಾಯಿತೆಂದು ಕೇಳಿದಳು. ಕ್ಲಚ್ಚನ್ನು ಅದುಮುವ ಪಾದದ ಭಾಗ ಬಹಳ ಅಚ್ಚನ್ನು  ಉಂಟು ಮಾಡಿದೆ ಎಂದನು. ಇದರಿಂದ ಕುತೂಹಲಗೊಂಡ  ಗೆಳತಿಯರು ಹಾಗಾದರೆ ತಮ್ಮ ಬಗ್ಗೆಯೂ ಹೇಳಬೇಕೆಂದರು. ಒಬ್ಬಳಲ್ಲಿ ನೀವು ಗ್ರಾಮೀಣ ಪ್ರದೇಶದಿಂದ ಬಂದಿರುತ್ತೀಯ,ಇನ್ನೊಬ್ಬಳಲ್ಲಿ  ಬಹಳ ಹೊತ್ತು ಅಡುಗೆ ಮನೆಯಲ್ಲಿಯೇ ಇರುತ್ತೀಯ, ಇನ್ನೊಬ್ಬಳಲ್ಲಿ ನೀನೊಬ್ಬಳು ನಾಟ್ಯ ಪ್ರವೀಣೆ ಅಂದ. ಹೇಗೆ ಸರಿಯಾಗಿಯೇ  ಹೇಳಿದಿ  ಎಂದು ಆಶ್ಚರ್ಯದಿಂದ ಕೇಳಿದರು. ಮೊದಲನೆ  ಯವಳಲ್ಲಿ ನಿನ್ನ ಪಾದವು ತುಂಬಾ ದಡರು ನಿಂದ ಕೂಡಿದೆ, ಇನ್ನೊಬ್ಬಳ  ಪಾದ ತುಂಬಾ ಶುಷ್ಕದಿಂದ  ಕೂಡಿ  ನೆರಿಗೆ ಗಳು ಶುರುವಾಗಿದೆ, ಇನ್ನೊಬ್ಬಳಲ್ಲಿ ಹೆಜ್ಜೆ  ಹಾಕುವ ಪಾದದ  ಅಂಚುಗಳು ಗಟ್ಟಿಯಾಗಿದೆ! ಎಂದ. ಅಷ್ಟು ಹೊತ್ತಿಗೆ ಉಂಗುಷ್ಟದ ಹೊಲಿಗೆಯೂ ಸಂಪೂರ್ಣವಾದವು. ಮತ್ತೆ   ಚಪ್ಪಲಿಯನ್ನು ಪಾಲಿಶ್  ಮಾಡುತ್ತಲೇ ...ಇರುವಾಗ  ಒಬ್ಬಳ ಕೈಯಿಂದ ಪುಸ್ತಕ  ಜಾರಿ  ಇವನ ಕೈಗಳಿಗೆ ಬಿದ್ದವು. ಹೀಗಿರುವಾಗ ಒಂದು ಪುಟ ಸಂಪೂರ್ಣವಾಗಿ ಪಾಲಿಶ್ ಮಯವಾದವು...ಆ ಪುಟ ತುಂಬಾ ಮುಖ್ಯ ವಾದವು  ಪಾಲಿಶ್ ನ್ನು ತೆಗೆಯ ಬೇಕೆಂದು ರೇಗಿದಳು. ಸಮಗಾರ ಪಾಲಿಶ್ ನ್ನು ತೆಗೆಯಲು ಪ್ರಯತ್ನಿಸಿದನು. ಇನ್ನೂ ರೇಗಿದಳು. ಸಮಗಾರ ತಾಳ್ಮೆಯನ್ನು  ಕಳಕೊಂಡವನಂತೆ   ಕಂಡು ಬಂದನು... ಬುಕೈ  ಯಲ್ಲಿರುವ  ಹೂವನ್ನು ನಾಲ್ಕೂ ದಿಕ್ಕುಗಳಲ್ಲಿ ಎಸೆದನು.   ಮತ್ತೆ ಜೋರಾಗಿ ರೇಗಿದಳು. ಬರು ಬರುತ್ತಾ ಇವನು ಪ್ರಯತ್ನ ವನ್ನು ನಿಲ್ಲಿಸಿದನು...

ನಾನು ಎಸೆದ ಹೂವುಗಳೆಲ್ಲಾ ಎಲ್ಲಿ ಹೋದವು ಗಮನಿಸಿದ್ದೀರಾ...? ಎಂದನು . ಯಾವ ಹೂವುಗಳೂ ಅಲ್ಲಿ ಇರಲಿಲ್ಲ. "ನಮ್ಮ ಸುತ್ತ ನಾಲ್ಕು ವಿವಿಧ ರೀತಿಯ   ಜನರು  ಬಂದು ಹೋಗಿದ್ದಾರೆ. ಮೊದಲನೆಯವನು   ಆಸ್ತಿಕ, ಹೂವನ್ನು ದೇವರಲ್ಲಿ  ಇಟ್ಟಿದ್ದಾನೆ  , ಎರಡೆನೆಯವನು ರಕ್ಷಕ   ಹೂವಿನ ಮುಳ್ಳನ್ನು  ಬೇಲಿಯೊಂದಿಗೆ ಇರಿಸಿದ್ದಾನೆ.  ಇನ್ನೊಬ್ಬ ರಸಿಕ ಪ್ರೇಮಿ  ಹೂವನ್ನು ಗೆಳತಿಗೆ ತೋರಿಸುತ್ತಿದ್ದಾನೆ! ಇನ್ನೊಬ್ಬ ಅವಿವೇಕಿ  ಸಮಾಜ ಘಾತುಕ  ಮುಳ್ಳನ್ನು  ಅಂಗಡಿಯಲ್ಲಿರುವ  ಬಾಳೆ  ಹಣ್ಣಿನೊಳಗೆ  ಇರಿಸುತಿದ್ದಾನೆ."  ಎಂದ.
 ಇದನ್ನೆಲ್ಲಾ   ಯಾಕಪ್ಪಾ  ಹೇಳುತ್ತೀಯಾ ..  ಅವರಲ್ಲೇ ಒಬ್ಬಳು ಕೇಳಿದಳು...ಸಮಗಾರ ತನ್ನ ಪ್ರಯತ್ನ ದಿಂದ ಆ ಪುಟದಿಂದ  ತೆಗೆದ  ಪಾಲಿಶ್ ನಲ್ಲಿ ಬರೀ ಶೀರ್ಷಿಕೆ  ಮಾತ್ರ ಕಾಣುತಿತ್ತು ... " ಜಗತ್ತು  ಮತ್ತು ವೈವಿದ್ಯತೆ . !"

ಅವರು ಹೋಗುತಿದ್ದುದು  ಬೇರೆ  ಯಾವ ಸಮಾರಂಭಕ್ಕೂ ಅಲ್ಲ. " ಜಗತ್ತು ಮತ್ತು ವೈವಿದ್ಯತೆ. " ಎಂಬ ಬಗ್ಗೆ  ಮಂಡಿಸಲು .
1000  ಕೋಟಿ ಜನರಿಗೂ ಜಗತ್ತು ಒಂದೇ , ಸಮಯದ ಪ್ರಮಾಣ ವೂ ಒಂದೇ!  ಉಪಯೋಗಿಸುವ  ಅವಕಾಶ ,ಮತ್ತು ರೀತಿ, ಸಮಯ  ವೈವಿದ್ಯವನ್ನು ಸೃಷ್ಟಿಸುತ್ತದಲ್ವೆ ..? ಎಂದು ಮೇಲಿನ ನಿದರ್ಶನ ಕೊಟ್ಟು ಮಂಡಿಸಿದಳು......